ಯಕ್ಷದೇವಮಿತ್ರ 18ರ ಸಂಭ್ರಮ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ಜೂನ್ 26 , 2015
|
ಜೂನ್ 26, 2015
|
ಯಕ್ಷದೇವಮಿತ್ರ 18ರ ಸಂಭ್ರಮ
ಮೂಡುಬಿದಿರೆ :
ಯಕ್ಷಗಾನ ಸಾಮಾಜಿಕ ಸಂಸ್ಕಾರವನ್ನು ರೂಪಿಸುವ, ಪುರಾಣ ಲೋಕದ ಸತ್ವ ಗಳೊಂದಿಗೆ ಜೀವನಾದರ್ಶದ ತತ್ವಗಳನ್ನು ಬೋಧಿಸುವ ಪರಿಪೂರ್ಣ ಕಲೆ ಎಂದರಿತು ಇದನ್ನು ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಬೆಳೆಸುವ ಆಸಕ್ತಿಯಿಂದ ಸಮಾನ ಮನಸ್ಕರನ್ನು ಕಟ್ಟಿಕೊಂಡು 18 ವರುಷಗಳ ಹಿಂದೆ ಹುಟ್ಟಿಕೊಂಡ ಸಂಸ್ಥೆಯೇ ಶ್ರೀ ಯಕ್ಷದೇವ ಮಿತ್ರ ಕಲಾಮಂಡಳಿ ಬೆಳುವಾಯಿ.
ಪ್ರತಿವರ್ಷ ಹೊಸತರ ರಸದೌತಣ ಉಣಬಡಿಸುತ್ತಾ ಬಂದಿದೆ ಈ ಸಂಸ್ಥೆ. ಮೂಡುಬಿದಿರೆಯಲ್ಲಿ ಪ್ರತೀ ಮಳೆಗಾಲ ದಲ್ಲಿ ಸೊಗಸಾಗಿ ಜನರಂಜನೆಯೊಂದಿಗೆ ಮನಮುಟ್ಟುವ ಕಲಾಉತ್ಸವಗಳನ್ನು ಮಾಡುತ್ತ ಸಾಧಕ ಕಲಾವಿದರನ್ನು ಗುರುತಿಸಿ ಪುರಸ್ಕರಿಸುವುದು ಕೂಡ ಈ ಸಂಸ್ಥೆಯ ಜವಾಬ್ದಾರಿ. ಹವ್ಯಾಸಿ ತಾಳಮದ್ದಳೆ ಸ್ಪರ್ಧೆ, ಹಿಮ್ಮೇಳ ಸ್ಪರ್ಧೆ, ಹಾಸ್ಯಗಾರರಿಂದಲೇ ತಾಳಮದ್ದಳೆ, ಮನೆಮನೆಗಳಲ್ಲಿ ಚಾವಡಿಕೂಟ, ಸಂಭಾಷಣಾ ನೃತ್ಯ-ನಾಟ್ಯ ತಾಳಮದ್ದಳೆ, ಯಕ್ಷಗಾನ ಅಂತ್ಯಾಕ್ಷರಿ, ಗಾನ ವೈಭವ ಹೀಗೆ ಹತ್ತು ಹಲವುಗಳಿಗೆ ಮೊದಲ ಸಂಸ್ಥೆ ಶ್ರೀ ಯಕ್ಷದೇವ ಮಂಡಳಿ. ಹೀಗೆ ಯಕ್ಷಗಾನವನ್ನು ಇಡಿಯಾಗಿ ದೀರ್ಘ ಅವಧಿ ಯಲ್ಲಿ, ಬಿಡಿಯಾಗಿ ಕಿರು ಅವಧಿಯಲ್ಲಿ ಪ್ರದರ್ಶಿಸಿ ಮೂಡು ಬಿದಿರೆಯ ಪ್ರೇಕ್ಷಕರನ್ನು ಕುತೂಹಲದ ತುದಿಗಾಲಲ್ಲಿ ನಿಲ್ಲಿಸುತ್ತಾ ಬಂದಿರುವುದು ಯಕ್ಷದೇವ ಮಿತ್ರಮಂಡಳಿಯ ಹಿರಿಮೆ.
ಈ ಬಾರಿಯ 18ರ ಸಂಭ್ರಮ "ಯಕ್ಷಾಯನ 2015' ಜುಲೈ 1ರಿಂದ 5ರ ತನಕ ಮೂಡುಬಿದಿರೆಯ ಪದ್ಮಾವತಿ ಕಲಾ ಮಂದಿರದಲ್ಲಿ ಪ್ರತಿದಿನ ಸಂಜೆ 4ರಿಂದ ವೈವಿಧ್ಯಮಯ ರಸಸಂಜೆ ಗಳನ್ನು ಸೃಷ್ಟಿಸಲಿದೆ.
ಕೃಪೆ :
udayavani
|
|
|